Thursday 9 July 2015

ಗಾಂಧೀ ದೃಷ್ಟಿಯಲ್ಲಿ ಸತ್ಯಾಗ್ರಹ

ಮಹಾತ್ಮ ಗಾಂಧಿಯವÀರು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ವಿಮೋಚನೆಗೊಳಿಸಿದ ರಾಷ್ಟ್ರನಾಯಕರು. 19ನೆಯ ಶತಮಾನದ ಯುರೋಪಿನ ಕೈಗಾರಿಕಾ ಕ್ರಾಂತಿ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯ ವಿಸ್ತರಣಗಳ ಪರಿಣಾಮವಾಗಿ ಏಷ್ಯ ಆಫ್ರಿಕ ಖಂಡಗಳಲ್ಲಿಯ ಬಹು ಭಾಗ ದಾಸ್ಯಕ್ಕೆ ಒಳಗಾಗಿತ್ತು. ದಕ್ಷಿಣ ಆಫ್ರಿಕದಲ್ಲಿದ್ದ ಭಾರತೀಯ ವರ್ತಕರ ವಕೀಲರಾಗಿ ಅಲ್ಲಿಗೆ ಹೋಗಿದ್ದ ಗಾಂಧೀಯವರು ಅಲ್ಲಿಯ ಬ್ರಿಟಿಷ್ ಸಾಮ್ರಾಜ್ಯ ಶಾಹಿ ವರ್ಣೀಯರನ್ನು ಅತ್ಯಂತ ಹೀನದಾಸ್ಯಕ್ಕೆ ಗುರಿಮಾಡಿ ಅವರ ನಾಗರಿಕ ಹಕ್ಕುಗಳನ್ನೆಲ್ಲ ದಮನ ಮಾಡಿದ್ದನ್ನು ಕಂಡು ಮೊದಲ ಬಾರಿಗೆ ಪ್ರತಿಭಟಿಸಿ ನಿಲ್ಲುವ ಸಾಹಸ ಮಾಡಿದರು. ಅಸಂಖ್ಯಾತ ಬಡ ಕೂಲಿಗಾರರ ಸಮೂಹವನ್ನು ಸಂಘಟಿಸಿ, ಅಲ್ಲಿ ನೆಲೆಸಿದ್ದ ಇತರ ಬುದ್ಧಿ ಜೀವಿಗಳ ನೆರವನ್ನೂ ಪಡೆದ ನಿಶ್ಯಸ್ತ್ರ ಸಾಮೂಹಿಕ ಪ್ರತಿಭಟನಾ ಸಮರವೊಂದನ್ನು ಪ್ರಾರಂಭಿಸಿದರು. ಮಾನವನ ನೈತಿಕಶಕ್ತಿಗಳನ್ನು ಜಾಗೃತಗೊಳಿಸಿ ಆತ್ಮಗೌರವದ ನಿಷ್ಠೆಯನ್ನು ಉಜ್ವಲಗೊಳಿಸಿ ಸಾಮಾನ್ಯ ಜನತೆ ಒಂದು ಪ್ರಬಲ ಸಶಸ್ತ್ರ ಸಾಮ್ರಾಜ್ಯ ಸರ್ಕಾರದ ಅನ್ಯಾಯ ದುರಾಡಳಿತಗಳನ್ನು ಪ್ರತಿಭಟಿಸಿ ನಿಲ್ಲುವಂತೆ ಪ್ರೇರೇಪಿಸಿ ದರು. ಅವಮಾನಕರ ಕಾನೂನು ಗಳನ್ನು ಸವಿನಯವಾಗಿ ಉಲ್ಲಂಘಿಸಿ ದಬ್ಬಾಳಿಕೆಯ ಶಿಕ್ಷೆಯನ್ನನುಭವಿಸುತ್ತ ಸತತವಾಗಿ ನ್ಯಾಯಕ್ಕಾಗಿ ಹೋರಾಡುವ ಕ್ರಮವನ್ನು ರೂಪಿಸಿದರು. ಮೊದಲು ಸದಾಗ್ರಹ ಎಂದೂ ಅನಂತರ ಸತ್ಯಾಗ್ರಹ ಎಂದೂ ಅದಕ್ಕೆ ಹೆಸರಿಟ್ಟರು. ರಸ್ಕಿನ್, ಟಾಲ್ಸ್ಟಾಯ್, ಥಾರೋ, ಮತ್ತು ರಾಯಿಚಂದಭಾಯಿ ಅವರ ಬರೆಹಗಳಿಂದಲೂ ಗೀತಾ, ಉಪನಿಷತ್, ಕುರಾನ್, ಬೈಬಲ್ಗಳ ಮೂಲ ತತ್ತ್ವಗಳ ಅಧ್ಯಯನ ಅನುಷ್ಠಾನಗಳಿಂದಲೂ ಪ್ರೇರಣೆ ಪಡೆದು ಸತ್ಯಾಗ್ರಹ ಚಳವಳಿಯನ್ನು 1906ರಲ್ಲಿ ಪ್ರಾರಂಭಿಸಿದರು. 1917ರಲ್ಲಿ ಭಾರತಕ್ಕೆ ಬಂದು ಸಾಬರಮತಿಯ ಸತ್ಯಾಗ್ರಹಾಶ್ರಮವನ್ನು ಸ್ಥಾಪಿಸಿ ಭಾರತದ ಸ್ವಾತಂತ್ರ್ಯ ಸಮರದ ನಾಯಕತ್ವ ವಹಿಸಿಕೊಂಡರು. ಅವರ ಇಡೀ ಜೀವನವೇ ಅಲ್ಲಿಂದಾಚೆಗೆ ಸತ್ಯಾಗ್ರಹ ಪಥವನ್ನು ಹಿಡಿದು ನಡೆದರು. ಜೀವನದ ಯಾವ ಕ್ಷೇತ್ರದಿಂದಲೂ ವಿಮುಖವಾಗದೆ, ಆದರ್ಶದ ಒರೆಗಲ್ಲಿಗೆ ಸಕಲ ಕರ್ಮಗಳನ್ನೂ ನಿಷ್ಠುರವಾಗಿ ಉಜ್ಜಿನೋಡಿ, ಸತ್ಯದ ಅರಿವಾದೊಡನೆ ನಿರ್ಭಯವಾಗಿ ಅದನ್ನನುಸರಿಸಿ ಮುನ್ನಡೆಯಲು ವ್ಯಕ್ತಿಗಾಗಲಿ, ಸಮಾಜಕ್ಕಾಗಲಿ, ರಾಷ್ಟ್ರಕ್ಕಾಗಲಿ ಅಹಿಂಸಾಮಾರ್ಗವೊಂದೇ ಸಾಧನ; ಅದೇ ಸತ್ಯಾಗ್ರಹ. ಇದು ಗಾಂಧಿಯವರು ಕಂಡುಕೊಂಡ ಸಿದ್ಧಾಂತ.

ಜೀವನದ ಸಮಸ್ಯೆಗಳನ್ನು ಸಮಗ್ರವಾಗಿ ಕಂಡು ಅವುಗಳನ್ನೆದುರಿಸಿ ಪರಿಹಾರ ಪಡೆದುಕೊಳ್ಳಲು ಅಹಿಂಸಾತ್ಮಕ ಹೋರಾಟವನ್ನು ಆತ್ಮಶಕ್ತಿಯ ಬಲದಿಂದ ನಡೆಸುವುದು ಸತ್ಯಾಗ್ರಹ. ಶಸ್ತ್ರಬಲದ ಅಥವಾ ಭಯೊತ್ಪಾದನೆಯ ಮೂಲಕ ಕಡ್ಡಾಯವಾಗಿ ಪರಿವರ್ತನೆ ಸಾಧಿಸುವ ಕ್ರಮದಿಂದ ಮಾನವೀಯ ಸಂಬಂಧಗಳು ಕಡಿಯುತ್ತವೆ. ಅದರಿಂದ ಉದ್ದೇಶಿತ ಫಲ ದೊರಕುವುದಿಲ್ಲ. ಆದ್ದರಿಂದ ವಿಕಾಸಶೀಲ ಕ್ರಾಂತಿಗೆ ಸತ್ಯಾಗ್ರಹವೇ ಆಧಾರಶಕ್ತಿ ಎನ್ನುವುದು ಗಾಂಧೀವಾದ. ಅವರ ಮಾತಿನಲ್ಲಿ ‘ಕೌಟಂಬಿಕ ಪ್ರೇಮತತ್ತ್ವವನ್ನು ರಾಜಕೀಯಕ್ಕೆ ವಿಸ್ತರಣೆ ಮಾಡುವುದೇ ಸತ್ಯಾಗ್ರಹ. ಕುಟುಂಬದಲ್ಲಿ ತೊಂದರೆಗೀಡಾದ ವ್ಯಕ್ತಿ ಇತರರ ವಿಷಯದಲ್ಲಿ ಪ್ರೇಮಭಾವ ಕಳೆದುಕೊಳ್ಳುವುದಿಲ್ಲ. ತನ್ನ ತತ್ತ್ವಗಳಿಗಾಗಿ ಹಿಂಸೆಯನ್ನು ಸಹಿಸಿಕೊಳ್ಳುತ್ತಾನೆ. ಭಿನ್ನಾಭಿಪ್ರಾಯದವರ ಬಗ್ಗೆ ಕ್ರೋಧವನ್ನಾಗಲಿ ಸೇಡಿನ ಮನೋಭಾವವನ್ನಾಗಲಿ ತಳೆದಿರುವುದಿಲ್ಲ. ಕ್ರೋಧದ ದಮನ, ಆತ್ಮ ಕ್ಲೇಶಾನುಭವ ಇವನ್ನು ಅಂಗೀಕರಿಸಿ ತಾಳ್ಮೆಯಿಂದ ಇತರರ ತಪ್ಪನ್ನು ತಿದ್ದುವ ಪ್ರಯತ್ನ ಮಾಡುತ್ತಾನೆ. ಉತ್ಕಟ ಪರಿಸ್ಥಿತಿಗಳಲ್ಲಿ ಕುಟುಂಬದ ಇತರರೊಂದಿಗೆ ಜಾಗ್ರತೆ ಒಮ್ಮತಕ್ಕೆ ಬಂದು ಕುಟುಂಬದ ಶಾಂತಿಯುತ ಕ್ಷೇಮಕ್ಕೆ ನೆರವಾಗುತ್ತಾನೆ. ಈ ಪ್ರೇಮತತ್ತ್ವ ಜಗತ್ತಿನ ಬಹುತೇಕ ನಾಗರಿಕ ರಾಷ್ಟ್ರಗಳ ಕುಟುಂಬಗಳಲ್ಲಿ ಆಗೋಚರವಾಗಿಯೂ ಸ್ಥಿರವಾಗಿಯೂ ಪ್ರಭಾವ ಬೀರುತ್ತಲೇ ಇದೆ. ಈ ತತ್ತ್ವವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳೆಲ್ಲದರಲ್ಲೂ ಒಪ್ಪಿದ ಹೊರತು ಜನಾಂಗಗಳ ಒಕ್ಕೂಟವಾಗಲಿ ಮನುಜಕುಲದ ಸರ್ವತೋಮುಖ ಏಳಿಗೆಯಾಗಲಿ ಅಸಾಧ’್ಯ ಸತ್ಯಾಗ್ರಹದ ಮೂಲಶಕ್ತಿ ಸತ್ಯನಿಷ್ಠೆ. ಸತ್ಯಕ್ಕಾಗಿ ಹೋರಾಡುವಾಗ ಹಿಂಸಾಚಾರ ಎಂದಿಗೂ ಸಮಂಜಸವಾದ ಅಸ್ತ್ರವಾಗಲಾರದು. ಅಹಿಂಸೆಯ ಪಥ ಅನಿವಾರ್ಯ. ವೈಯಕ್ತಿಕ ಅಹಿಂಸೆ ಮಾನವಧರ್ಮದ ಅವಿಭಾಜ್ಯ ಅಂಗ ಎಂದು ಎಲ್ಲ ಧರ್ಮಗಳು ನಂಬಿವೆ. ಅಂತೆಯೇ ಸಾಮೂಹಿಕ ಪ್ರತಿಭಟನೆ ಸತ್ಯವಿಷ್ಠವೂ ಅಹಿಂಸಾತ್ಮಕವೂ ಆದಾಗ ಮಾತ್ರ ಸಾಮಾಜಿಕ ನ್ಯಾಯ ಸುಪ್ರತಿಷ್ಠಿತವಾಗುತ್ತದೆ. ಇದರ ಪ್ರಪ್ರಥಮ ಪ್ರಯೋಗ ಗಾಂಧಿಯವರ ಸತ್ಯಾಗ್ರಹ ಚಳವಳಿಗಳು. 1906ರಲ್ಲಿ ದಕ್ಷಿಣ ಆಫ್ರಿಕದ ಟ್ರಾನ್್ಸವಾಲಿನಲ್ಲಿ ಏಷ್ಯನರ ಮೇಲೆ ಬಿಳಿಯರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಅಲ್ಲಿಯ ಕಾರ್ಮಿಕರು ಆತ್ಮಗೌರವದಿಂದ ಬಾಳಲು ಗಾಂಧಿಯವರು ಹೂಡಿದ ಮೊದಲ ಸತ್ಯಾಗ್ರಹ ಹಂತಹಂತವಾಗಿ ಬೆಳೆದು ಭಾರತದ ಸ್ವಾತಂತ್ರ್ಯ ಸಮರದ ಹದಿನಾಲ್ಕು ವಿವಿಧ ಪ್ರಯೋಗಗಳಲ್ಲಿ ಒಂದು ವ್ಯಾವಹಾರಿಕ ಸಿದ್ಧಾಂತವಾಯಿತು. ಸತ್ಯಾಗ್ರಹ ಎಂದರೆ ನಿಷ್ಕ್ರಿಯತೆ ಅಲ್ಲ. ಅನ್ಯಾಯಗಳನ್ನು ಸಹಿಸಿಕೊಂಡು ಉಪೇಕ್ಷೆಯಿಂದಿರುವುದಲ್ಲ. ಅದನ್ನು ಪ್ರತಿಭಟಿಸಿ ನಿಂತು ಪ್ರೇಮ ಶಕ್ತಿಯಿಂದ ಸರಿಪಡಿಸುವ ನೈತಿಕ ಸಮರವೇ ಸತ್ಯಾಗ್ರಹ. ಸವಿನಯ ಶಾಸನಭಂಗ, ಅಹಿಂಸಾತ್ಮಕ ಅಸಹಕಾರ, ಶಸ್ತ್ರಾವಲಂಬನೆಯ ನಿರಾಕರಣೆ, ತತ್ತ್ವಪಾಲನೆಯಲ್ಲಿ ನಿಸ್ಸೀಮಬಲಿದಾನದ ಸಿದ್ಧತೆ ವೈರಿಯ ಬಗ್ಗೆ ನಿಸ್ಸಂಕೋಚ ಪ್ರೀತಿ ಮತ್ತು ವ್ಯಕ್ತಿದ್ವೇಷದ ಸಂಪುರ್ಣದಮನ ಇವು ಸತ್ಯಾಗ್ರಹದ ಕ್ರಮಬದ್ಧ ಪ್ರಭಾವಿತ ಅಸ್ತ್ರಗಳೆಂದು ಗಾಂಧೀಜಿಯ ಸತ್ಯಾನ್ವೇಷಣೆಯ ಪ್ರಯೋಗಗಳು ಸಿದ್ಧಮಾಡಿ ಕೊಟ್ಟಿವೆ. ಸಾತ್ವಿಕ ಪ್ರತಿಭಟನೆಯಿಂದ ಮಾನವನ ದೌರ್ಜನ್ಯ ಪ್ರವೃತ್ತಿ ಕ್ರಮೇಣ ಅಳಿಸಿಹೋಗಿ ಮಾನವ ಮಾನವನಾಗುತ್ತಾನೆ ಎಂಬ ನಂಬಿಕೆ ಸತ್ಯಾಗ್ರಹಶಾಸ್ತ್ರದ ಅಡಿಗಲ್ಲು. ಮಾನವಚರಿತ್ರೆಯಲ್ಲಿ ವಿಕಾಸಶೀಲ ಪರಿವರ್ತನೆಗಳೆಲ್ಲವೂ ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಸತ್ಯಾಗ್ರಹಗಳ ಪರಿಣಾಮವಾಗಿಯೇ ಆಗಿವೆ. ಎನ್ನುವುದು ಗಾಂಧೀದೃಷ್ಟಿ. ಸತ್ಯಾನ್ವೇಷಣೆ ಮಾನವನ ಸಹಜಧರ್ಮ. ಅದು ಎಷ್ಟರಮಟ್ಟಿಗೆ ಅಹಿಂಸಾತ್ಮಕವಾಗಿ ಸಾಗುತ್ತದೆಯೋ ಅಷ್ಟರಮಟ್ಟಿಗೆ ಮಾತ್ರ ನಿಜವಾದ ವಿಕಾಸ ಸಾಗುತ್ತದೆ ಎನ್ನುವುದು ಗಾಂಧಿಯವರ ಅಭಿಪ್ರಾಯ. ಗುರಿಯಷ್ಟೇ ಸಾಧನವೂ ಶುದ್ಧವಾಗಬೇಕೆನ್ನುವುದೇ ಸತ್ಯಾಗ್ರಹಜೀವನದ ಮೂಲತತ್ತ್ವ. ಗಾಂಧಿಯವರ ದೃಷ್ಟಿಯಲ್ಲಿ ಸತ್ಯಾಗ್ರಹ ಕೇವಲ ರಾಜಕೀಯ ಕ್ಷೇತ್ರದ ಪ್ರತಿಭಟನೆಯ ಮಾರ್ಗ ಮಾತ್ರವಲ್ಲ. ಅದು ಒಂದು ಸಮಗ್ರ ಜೀವನವಿಧಾನದ ಸೂತ್ರವೂ ಹೌದು. ಹಿಂಸೆ ಕೇವಲ ಭೌತಿಕ ಸ್ವರೂಪದ್ದಷ್ಟೇ ಆಗಿರುವುದಿಲ್ಲ. ಅತ್ಯಂತ ಸೂಕ್ಷ್ಮ ರೂಪದ ಪರೋಕ್ಷ ಶೋಷಣೆಯ ವ್ಯವಸ್ಥೆಗಳೆಲ್ಲವೂ ವ್ಯಾಪಕ ಹಿಂಸೆಗೆ ಕಾರಣವಾಗುತ್ತವೆ. ಆದ್ದರಿಂದ ಎಲ್ಲ ರೀತಿಯ ಹಿಂಸಾಮಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳನ್ನು ನೈತಿಕ ದೃಷ್ಟಿಯಿಂದ ನಿರಾಕರಿಸಿ ಎಷ್ಟೇ ವೈಯಕ್ತಿಕ ಸಂಕಟಗಳಿಗೊಳಗಾಗ ಬೇಕಾದರೂ ಅವುಗಳೊಂದಿಗೆ ಅಸಹಕರಿಸಿ ನಿರ್ಭಯವಾಗಿ ವರ್ತಿಸುವುದೇ ಸತ್ಯಾಗ್ರಹ. ಈ ನಿರ್ಭಯತೆ ಬಹಳಮಟ್ಟಿಗೆ ಸ್ವಾವಲಂಬನೆಯ ಜೀವನದಿಂದ ಬರುತ್ತದೆ. ರಾಷ್ಟ್ರಗಳಾಗಲಿ ಜನಸಮೂಹಗಳಾಗಲಿ ಜೀವನದ ಅತ್ಯಾವಶ್ಯಕ ವಸ್ತುಗಳ ಪುರೈಕೆಗೆ ಪರಾವಲಂಬಿಗಳಾದರೆ ಶೋಷಣೆಗೆ ಗುರಿಯಾಗುವುದು ಅನಿವಾರ್ಯವಾಗುತ್ತದೆ. ಕ್ರಿಯಾತ್ಮಕವಾದ, ಆತ್ಮಗೌರವದಿಂದ ಕೂಡಿದ ಸ್ವತಂತ್ರವಿಚಾರ ಶಕ್ತಿಯುಳ್ಳ ಸರಳಜೀವನ ಸತ್ಯಾಗ್ರಹಿಯದವರಿಗೆ ಸಹಾಯವಾಗಬೇಕು ಎನ್ನುತ್ತಾರೆ ಗಾಂಧೀಜಿ. ಅಂಥ ಬಾಳಿನ ನಿಯಮಗಳನ್ನು ತಾವು ಅನುಷ್ಠಾನ ಮಾಡಿ, ಸಾಮೂಹಿಕ ದಳಗಳೂ ಯಶಸ್ವಿಯಾಗಿ ಆಚರಿಸುವಂತೆ ಮಾಡಿದ ವಿಶಿಷ್ಟ ಮಾರ್ಗದರ್ಶನ ಗಾಂಧಿಯವರದು. ಈ ನಿಯಮಗಳನ್ನು ಅವರು ಏಕಾದಶವ್ರತಗಳೆಂದು ಕರೆದರು. ಧಾರ್ಮಿಕ ಪರಂಪರೆಗಳಿಗೆ ಸುಪರಿಚಿತವಾದ ಸತ್ಯ. ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅಸ್ವಾದಗಳ ಜೊತೆಗೆ ಸಾಮಾಜಿಕ ಮೌಲ್ಯಗಳುಳ್ಳ ಶರೀರಶ್ರಮ, ಸರ್ವಧರ್ಮ ಸಮಭಾವ, ಸ್ಪರ್ಶಭಾವನೆ, ಸ್ವದೇಶೀ ಮತ್ತು ನಿರ್ಭಯತೆಗಳನ್ನು ಅವರು ಸೇರಿಸಿದರು. ಸತ್ಯಾಗ್ರಹಶಾಸ್ತ್ರದಲ್ಲಿ ಈ ವ್ರತ ನಿಯಮಗಳು ಅತ್ಯಂತ ಮುಖ್ಯವಾದ ಅಂಗ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಿರುವ ಯುದ್ಧವಿರೋಧೀ ಚಳವಳಿ, ಸಾತ್ತ್ವಿಕ ಪ್ರತಿಭಟನೆ ಶಾಸನೋಲ್ಲಂಘನೆ ಕರನಿರಾಕರಣೆ, ಮುಂತಾದ ನಿಶ್ಯಸ್ತ್ರ ಪ್ರತಿಭಟನಾಕ್ರಮಕ್ಕೂ ಸತ್ಯಾಗ್ರಹಕ್ಕೂ ಒಂದು ಮೂಲಭೂತ ವ್ಯತ್ಯಾಸವುಂಟು. ಅವನ್ನು ನಡೆಸುವವರು ಆಯುಧ ದೊರಕದ್ದರಿಂದ ತಾವು ದುರ್ಬಲರೆಂದು ತಿಳಿದು ಆ ಚಳವಳಿಗಳಲ್ಲಿ ಹಿಂಸೆಯನ್ನು ವರ್ಜಿಸುತ್ತಾರೆ. ಅವಕಾಶ ಒದಗಿದಾಗ ಹಿಂಸೆಯನ್ನು ಉಪಯೋಗಿಸಲು ಅವರು ಹಿಂದೆಗೆಯುವುದಿಲ್ಲ. ಅಲ್ಲದೆ ರಾಷ್ಟ್ರ ರಕ್ಷಣೆಗಾಗಿ ಶಸ್ತ್ರಾಸ್ತ್ರ ಸಂಗ್ರಹಣೆ ಅತ್ಯಗತ್ಯ ಎಂದು ನಂಬಿ ಅದನ್ನು ಬೆಂಬಲಿಸುತ್ತಾರೆ. ಗಾಂಧಿಯವರು ರೂಪಿಸಿಕೊಟ್ಟ ಸತ್ಯಾಗ್ರಹಕ್ರಮ ದಲ್ಲಿ ಹಿಂಸೆಗೆ ಯಾವ ಸಂದರ್ಭದಲ್ಲೂ ಅವಕಾಶವೇ ಇರಲಾಗದು. ಸತ್ಯಾಗ್ರಹದಲ್ಲಿ ಸತ್ಯ ಮತ್ತು ಅಹಿಂಸೆ ಅನ್ಯೋನ್ಯಾವಲಂಬಿ ತತ್ತ್ವಗಳು. ಒಂದಕ್ಕೆ ಇನ್ನೊಂದು ಆಶ್ರಯ. ಅತ್ಯಂತ ಪ್ರಬಲ ರಾಷ್ಟ್ರವೂ ಶಸ್ತ್ರ ನಿರಾಕರಣೆಯನ್ನು ಅಂಗೀಕರಿಸುವುದು ಸತ್ಯಾಗ್ರಹಮಾರ್ಗ. ಸತ್ಯವನ್ನು ಹಿಂಸಾವೃತ್ತಿಯಿಂದ ಪಡೆಯುವುದು ಅಸಾಧ್ಯ. ಅಹಿಂಸೆ ಒಂದು ಸಶಕ್ತ ಆತ್ಮಶಕ್ತಿಯ ಪ್ರಕಟಿತರೂಪ; ಅದಕ್ಕೆ ಶಸ್ತ್ರದ ಅವಲಂಬನೆ ಯಾವ ಸಂದರ್ಭದಲ್ಲೂ ಅನಾವಶ್ಯಕ; ಈ ಶಕ್ತಿ ಸಮರದಿಂದ ಸಮರಕ್ಕೆ ವೃದ್ಧಿಯಾಗುತ್ತ್ವೈರವನ್ನು ಸಂಪುರ್ಣ ವಾಗಿ ತೊಡೆದುಹಾಕುತ್ತದೆ. ಸತ್ಯಾಗ್ರಹದ ಶುದ್ಧಸ್ವರೂಪದಲ್ಲಿ ಈ ನಿಷ್ಠೆ ಆಡಗಿದೆ. ಸತ್ಯಾಗ್ರಹ ಕ್ರಮದಲ್ಲಿ ವೈರಿಯನ್ನು ಸಾಂಪ್ರದಾಯಿಕ ದೃಷ್ಟಿಯಿಂದ ಹತ್ಯಾಯೋಗ್ಯ ಪಾಪಿ ಎಂದು ಪರಿಗಣಿಸಲಾಗುವುದಿಲ್ಲ. ಅವನಲ್ಲಿ ತಾತ್ಕಾಲಿಕವಾಗಿ ಸುಪ್ತವಾಗಿರುವ ವಿವೇಕಪುರ್ಣ ಸಾತ್ತ್ವಿಕತೆಯನ್ನು ಎಚ್ಚರಗೊಳಿಸಿ ಅವನು ತನ್ನ ತಪ್ಪನ್ನು ತಾನೇ ಅರಿಯುವಂತೆ ಮಾಡುವ ಪ್ರಕ್ರಿಯೆ ಸತ್ಯಾಗ್ರಹ. ಗಾಂಧಿಯವರ ಮಾತಿನಲ್ಲಿ, ದುರುಳ ಎತ್ತುವ ಕತ್ತಿಯ ಎದುರು ಇನ್ನೂ ಹೆಚ್ಚು ಹರಿತವಾದ ಆಯುಧವನ್ನು ಹಿಡಿಯದೆಯೇ ಅವನ ಕತ್ತಿಯ ಅಲಗನ್ನು ಮೊಂಡಾಗಿಸುವ ಪ್ರಯತ್ನ ನನ್ನದು. ಅವನು ನಿರೀಕ್ಷಿಸುವ ದೈಹಿಕ ಪ್ರತಿಭಟನೆಯನ್ನು ಕಾಣದೆ ಹೋದಾಗ ಅವನು ಹತಾಶನಾಗುತ್ತಾನೆ. ನನ್ನ ಸಾತ್ತ್ವಿಕ ಪ್ರತಿಭಟನೆ ಅವನ ಹಿಡಿತಕ್ಕೆ ಸಿಗದು. ಅವನನ್ನು ದಿಗ್ಭ್ರಾಂತನನ್ನಾಗಿ ಮಾಡಿ ಬಿಡುತ್ತದೆ. ಕೊನೆಗೆ ಅವನು ಅಂಥ ಸಾತ್ತ್ವಿಕ ಪ್ರತಿಭಟನೆಯನ್ನು ಗೌರವದಿಂದ ಕಾಣುತ್ತಾನೆ. ಹೀಗೆ ಮಾನ್ಯತೆ ನೀಡುವುದು ಅವನಿಗೆ ಅಪಮಾನ ಎನಿಸುವುದಿಲ್ಲ. ತನ್ನ ಘನತೆ ಹೆಚ್ಚಾಯಿತೆಂದೇ ಅವನು ಭಾವಿಸುತ್ತಾನೆ. ತನ್ನ ವೈರಿ ಶರಣಾಗತನಾಗಿ ತಾನು ಅವನ ಮೇಲೆ ಅಧಿಕಾರ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ ಸತ್ಯಾಗ್ರಹಿಗೆ ಸಲ್ಲದು. ಸತ್ಯಾಗ್ರಹ ಸಮರದ ಅಂತ್ಯದಲ್ಲಿ ಗೆದ್ದವರೂ ಪುನೀತರಾಗುತ್ತಾರೆ, ಸೋತವರೂ ಪುನೀತರಾಗುತ್ತಾರೆ. ಯಾವ ಬಲತ್ಕಾರಕ್ಕೂ ಮಣಿಯದೆ ಭಿನ್ನಾಭಿಪ್ರಾಯಗಳು ಸಮರಸ ವಾಗಿ ಕೊನೆಗೊಂಡು ಪರಸ್ಪರ ಸಹಕಾರಿಗಳಾಗಿಯೆ ಉಳಿಯುವುದು ಸತ್ಯಾಗ್ರಹದ ಗೆಲುವು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೊನೆಗೊಂಡಾಗ ಭಾರತ, ಬ್ರಿಟನ್ ಎರಡು ರಾಷ್ಟ್ರಗಳೂ ಧನ್ಯತೆಯ ಅನುಭವವನ್ನು ಪಡೆದುದ್ದು, ಒಂದು ಪ್ರಖ್ಯಾತ ನಿದರ್ಶನ. ಚಕ್ರಾಧಿಪತ್ಯದ ಪ್ರತಿನಿಧಿಯೇ ತಮ್ಮ ಬಾವುಟವನ್ನು ಇಳಿಸಿ ಸ್ವತಂತ್ರ್ಯ ಭಾರತದ ಪ್ರಜಾನುರಾಗಿ ಗವರ್ನರ್-ಜನರಲ್ ಎನಿಸಿಕೊಂಡರು. ಇದು ಸತ್ಯಾಗ್ರಹದ ಒಂದು ಪರಿಣಾಮ.

ಗಾಂಧಿಯವರು ನಿರ್ದೇಶಿಸಿದ ಸತ್ಯಾಗ್ರಹಗಳಲ್ಲಿ ಅವರು ಸ್ವತಃ ಒಂದು ಸ್ವಯಂ ಸೇವಕ ಶಿಕ್ಷಣಕ್ರಮವನ್ನು ಅನುಸರಿಸುತ್ತಿದ್ದರು. ಸಾಮೂಹಿಕ ಸತ್ಯಾಗ್ರಹ ಇನ್ನೂ ಹೊಸ ಪ್ರಯೋಗ, ಅದಕ್ಕೆ ಜನತೆಯ ಅತ್ಯಂತ ದಕ್ಷವಾದ ಶಿಸ್ತಿನ ಶಿಕ್ಷಣ ಅತ್ಯಗತ್ಯ ಎಂದರು. ಸತ್ಯಾಗ್ರಹವೆಂದರೆ ವೇದನೆಯನ್ನು ಸದಾ ಸಹಿಸುವ ನಿರಂತರ ಸಿದ್ಧತೆ. ಈ ಸಹನೆ ನಿಷ್ಕಲಂಕವಾದಷ್ಟೂ ಅದರ ಪರಿಣಾಮ ಸತ್ತ್ವಶಾಲಿಯಾಗುತ್ತದೆ. ಸತ್ಯಾಗ್ರಹದಲ್ಲಿ ಅಸಹಾಯಕತೆ ಎಂದಿಗೂ ಇರಬಾರದು ಎನ್ನುತ್ತಿದ್ದರು. ತಮ್ಮ ಸೂಚನೆಗಳ ಹಿನ್ನೆಲೆಯಲ್ಲಿ ಯಾವ ಗುಣಗಳು ಪ್ರತಿ ಸತ್ಯಾಗ್ರಹಿಯಲ್ಲೂ ಇರಬೇಕೋ ಅವನ್ನು ಅವರು ಹೀಗೆ ಸಂಗ್ರಹಿಸಿಕೊಟ್ಟಿದ್ದಾರೆ: 1 ಸತ್ಯಸ್ವರೂಪನಾದ ದೇವರಲ್ಲಿ ಅಚಲನಂಬಿಕೆ. 2 ಸತ್ಯ ಅಹಿಂಸೆಗಳಲ್ಲೂ ಕಷ್ಟಸಹಿಷ್ಣುತೆಯಿಂದ ಇತರರಲ್ಲಿ ಎಚ್ಚರಗೊಳ್ಳುವ ಮಾನವೀಯ ಒಳ್ಳೆಯತನದಲ್ಲೂ ವಿಶ್ವಾಸ. 3 ಪರಿಶುದ್ಧ ಜೀವನ, ತ್ಯಾಗಬಲಿದಾನಗಳಿಗೆ ಸಿದ್ಧತೆ. 4 ಸ್ವದೇಶೀ ಮತ್ತು ಶರೀರಶ್ರಮ ವ್ರತಗಳ ಸ್ವೀಕಾರ. 5 ಮದ್ಯ ಮತ್ತು ಇತರ ಮಾದಕವಸ್ತುಗಳ ಸಂಪುರ್ಣ ನಿಷೇಧ. 6 ಕಾಲಕಾಲಕ್ಕೆ ಅನುಸರಿಸಬೇಕಾದ ಶಿಸ್ತುಗಳ ಮನಃಪುರ್ವಕ ಪಾಲನೆ. 7 ಶಿಕ್ಷೆಯನ್ನು ಸಂತೋಷದಿಂದ ಅನುಭವಿಸುವಾಗ ನಿಯಮಗಳನ್ನು ಪಾಲಿಸುತ್ತ ವಿನಯ ಪುರ್ವಕವಾಗಿ ಆತ್ಮಗೌರವದಿಂದ ನಡೆದುಕೊಳ್ಳುವುದು.

ಸತ್ಯಾಗ್ರಹದ ಸಮಗ್ರರೂಪದ ಪರಿಣಾಮ ಮಾನವನ ಆಧ್ಯಾತ್ಮಿಕ ವಿಕಾಸ. ವಸ್ತುನಿಷ್ಠ ಬಾಹ್ಯ ಪ್ರಪಂಚದ ಸಂಪತ್ಸಮೃದ್ಧಿಯ ಅವಿರತ ಕಾರ್ಯದಲ್ಲಿ ತೊಡಗಿರುವಾಗಲೂ ಆತ್ಮವಿಕಾಸ ನಿರಂತರವಾಗಿ ಹರಿದುಬರುವ ಸಾಧನ ಸತ್ಯಾಗ್ರಹ ಜೀವನಮಾರ್ಗ. ವಿಜ್ಞಾನ + ಹಿಂಸೆ = ಸರ್ವನಾಶ; ವಿಜ್ಞಾನ + ಅಹಿಂಸೆ = ಸರ್ವೋದಯ, ಎಂದು ವಿನೋಬಾ ಭಾವೆಯವರು ಕೊಟ್ಟಿರುವ ಸೂತ್ರ ಗಾಂಧಿ ಪ್ರಣೀತ ಸತ್ಯಾಗ್ರಹ ಮಾರ್ಗದ ವ್ಯಾಖ್ಯೆಯೂ ಹೌದು. ವಿಜ್ಞಾನ ಮತ್ತು ಆತ್ಮಜ್ಞಾನಗಳ ಸಮತೋಲನ ವಿಕಾಸವಾಗುತ್ತ ಹೋದಂತೆ ಮಾನವಸಮಾಜದ ಸ್ವರೂಪವೇ ಬದಲಾಗಿ ಮಾನವೀಯ ಮೌಲ್ಯಗಳು ಸುಪ್ರತಿಷ್ಠವಾಗುತ್ತವೆ. ಸತ್ಯಾಗ್ರಹಶಾಸ್ತ್ರ ಈ ದಿಸೆಯಲ್ಲಿ ಸಂಶೋಧಿತವಾದ ಅತ್ಯಂತ ಪ್ರಭಾವಂತ ಸಿದ್ಧಾಂತವೆಂದು ಪರಿಗಣಿತವಾಗಿದೆ.

Wednesday 8 July 2015

ಕರ್ನಾಟಕ ರಾಜ್ಯದ ಆರ್ಥಿಕ ಆಭಿವೃದ್ದಿ ಮತ್ತು ರಾಜ್ಯದ ಹಣಕಾಸು ಸ್ಥಿತಿ

 ಕರ್ನಾಟಕ ರಾಜ್ಯದ ಆರ್ಥಿಕ ಆಭಿವೃದ್ದಿ ಮತ್ತು ರಾಜ್ಯದ ಹಣಕಾಸು ಸ್ಥಿತಿ:(ಸಂಕ್ಷಿಪ್ತ ಅವಲೋಕನ)
(Karnataka State Economic Development And The financial condition)

━━━━━━━━━━━━━━━━━━━━━━━━━━━━━━━━━━━━━━━━━━━━━

✧.ಕರ್ನಾಟಕ ರಾಜ್ಯದ ಆರ್ಥಿಕತೆ.
(Karnataka state economy)

✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)


☀ Ⅰ. ಆರ್ಥಿಕ ಆಭಿವೃದ್ದಿ ಮತ್ತು ರಾಜ್ಯದ ಹಣಕಾಸು ಸ್ಥಿತಿ :
━━━━━━━━━━━━━━━━━━━━━━━━━━━━━━━

✧.ರಾಜ್ಯದ ಆದಾಯ ಸಂಪನ್ಮೂಲಗಳು 2011-12 ನೇ ಸಾಲಿನಲ್ಲಿ ಇದ್ದ ಶೇ.16.07 ರಿಂದ ಚೇತರಿಕೆ ಚಿಹ್ನೆಗಳನ್ನು ತೋರಿಸುತ್ತಿದ್ದು 2014-15 ರಲ್ಲಿ ಶೇ . 1 6 . 2 1 ರಷ್ಟು ( ಆಯವ್ಯಯ ಅಂದಾಜು)ಏರಿಕೆಯನ್ನು ನಿರೀಕ್ಷಿಸಲಾಗಿದೆ.

✧.ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳು 2008- 09ರಲ್ಲಿದ್ದ ರೂ.27646 ಕೋಟಿಗಳಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ ಶೇಕಡ 16.71 ರಲ್ಲಿ 2014-15ಕ್ಕೆ ರೂ.69870 ಕೋಟಿಗಳಿಗೆ (ಆಯವ್ಯಯ ಅಂದಾಜು) ಏರಿಕೆಯಾಗಿರುತ್ತದೆ.

✧.2008-09ರಲ್ಲಿದ್ದ ಅಭಿವೃದ್ಧಿ ವೆಚ್ಚದ ಪಾಲು ಶೇಕಡ 10.07ರಿಂದ ಗಮನಾರ್ಹವಾಗಿ 2014-15 ಕ್ಕೆ (ಆಯವ್ಯಯ ಅಂದಾಜು) ಶೇಕಡ 13.74ಕ್ಕೆ ಏರಿಕೆಯಾಗಿರುತ್ತದೆ ಮತ್ತು ಇದೇ ಅವಧಿಯಲ್ಲಿ ಬಡ್ಡಿ ಪಾವತಿಗಳ ಪಾಲು ಶೇಕಡ 1.69ರಿಂದ ಶೇಕಡ 1.42ಕ್ಕೆ ಇಳಿದಿರುತ್ತದೆ.

✧.ತಲಾ ಅಭಿವೃದ್ಧಿ ವೆಚ್ಚವು 2011-12, 2012-2013 (ಪರಿಷ್ಕೃತ ಅಂದಾಜು) ಮತ್ತು 2013- 14(ಆಯವ್ಯಯ ಅಂದಾಜು) ಈ ಅವಧಿಗಳಲ್ಲಿ ಕ್ರಮವಾಗಿ ಎಲ್ಲಾ ರಾಜ್ಯಗಳ ಸರಾಸರಿಯಾದ ರೂ. 7044, ರೂ.8778 ಮತ್ತು ರೂ.9535ಕ್ಕೆ ಹೋಲಿಸಿದಾಗ ಕರ್ನಾಟಕದಲ್ಲಿ ಇದು ಕ್ರಮವಾಗಿ ರೂ.9972, ರೂ.11853 ಮತ್ತು ರೂ.13246 ಆಗಿರುತ್ತದೆ. ಕರ್ನಾಟಕದ ತಲಾ ಅಭಿವೃದ್ಧಿ ವೆಚ್ಚವು ಪ್ರಮುಖ ರಾಜ್ಯಗಳಿಗೆ ಹೋಲಿಸಿದಾಗ 2013- 14(ಆಯವ್ಯಯ ಅಂದಾಜು) ಅತೀ ಹೆಚ್ಚು ಮಟ್ಟದ್ದಾಗಿರುತ್ತದೆ.

✧.ರಾಜ್ಯ ಯೋಜನಾ ಹೂಡಿಕೆಯು ರೂ.17150 ಕೋಟಿಯಷ್ಟು ಗಮನಾರ್ಹವಾಗಿ ಏರಿಕೆಯಾಗಿದ್ದು, 2013-14ರ(ಪರಿಷ್ಕೃತ ಅಂದಾಜು) ರೂ.48450 ಕೋಟಿಯಿಂದ ರೂ.65600 ಕೋಟಿಗಳಿಗೆ 2014-15ರಲ್ಲಿ(ಆಯವ್ಯಯ ಅಂದಾಜು) ಏರಿರುತ್ತದೆ.

✧.2008-09ರಿಂದ ಯೋಜನಾ ವೆಚ್ಚದಲ್ಲಿ ಏರಿಕೆಯಾಗಿದ್ದು ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ಶೇಕಡ 7.42ರಿಂದ ಶೇಕಡ 9.79ಕ್ಕೆ 2014- 15ರಲ್ಲಿ(ಆಯವ್ಯಯ ಅಂದಾಜು) ಆಗಿರುತ್ತದೆ. 2008-09ರಲ್ಲಿನ ಯೋಜನೇತರ ವೆಚ್ಚವು ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ಶೇಕಡ 12.74ರಿಂದ 2014-15ಕ್ಕೆ (ಆಯವ್ಯಯ ಅಂದಾಜು) ಶೇಕಡ 11.73ಕ್ಕೆ ಇಳಿಕೆಯಾಗಿರುತ್ತದೆ.

✧.ಕರ್ನಾಟಕದ ಯೋಜನಾ ಸಾಧನೆಯು ಪರಿಣಾಮಕಾರಿಯಾಗಿದ್ದು, ಯೋಜನಾ ವೆಚ್ಚವು ವರ್ಷಗಳಿಂದ ಪರಿಣಾಮಕಾರಿ ಬೆಳವಣಿಗೆಯನ್ನು ತೋರಿಸುತ್ತಿದೆ ಮತ್ತು ಕರ್ನಾಟಕವು 2013- 14ರ(ಆಯವ್ಯಯ ಅಂದಾಜು) ರೂ.7472 ತಲಾ ಯೋಜನಾ ವೆಚ್ಚದೊಂದಿಗೆ ಅತ್ಯಂತ ತಲಾ ಯೋಜನಾ ವೆಚ್ಚ ಹೊಂದಿರುವ ರಾಷ್ಟ್ರದ ಪ್ರಮುಖ ರಾಜ್ಯಗಳ ಪೈಕಿ ಒಂದಾಗಿರುತ್ತದೆ.

✧.ರಾಜ್ಯ ಸರ್ಕಾರದ ಒಟ್ಟು ಹೊಣೆಗಾರಿಕೆಗಳು 2008-09ರಲ್ಲಿದ್ದ ಶೇಕಡ ರೂ.75286 ಕೋಟಿಗಳಿಂದ 2014-15ಕ್ಕೆ ರೂ.157681 ಕೋಟಿಗಳಿಗೆ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ ಶೇಕಡ13.11ರಷ್ಟು ಏರಿರುತ್ತದೆ. ಆದಾಗ್ಯೂ ಒಟ್ಟು ಹೊಣೆಗಾರಿಕೆಗಳು 13ನೇ ಹಣಕಾಸು ಆಯೋಗವು ನಿಗದಿಪಡಿಸಿದ ಶೇಕಡ 25ರ ಮಿತಿಯೊಳಗೆ ಇರುತ್ತವೆ.

✧.ಜಿಲ್ಲಾ ವಲಯ ಯೋಜನಾ ಗಾತ್ರವು (ಕೇಂದ್ರದ ಪಾಲೂ ಸೇರಿದಂತೆ) 2010-11ರಲ್ಲಿದ್ದ ರೂ.4870 ಕೋಟಿಗಳಿಂದ 2014-15ಕ್ಕೆ (ಆಯವ್ಯಯ ಅಂದಾಜು) ರೂ. 10480 ಕೋಟಿಗೆ ಏರಿಕೆಯಾಗಿರುತ್ತದೆ.

✧.ರಾಜ್ಯದ ಸಾಲ-ಠೇವಣಿ ಅನುಪಾತವು ಮಾರ್ಚ್ 2014ರಂದು ಶೇಕಡ 75.24 ಆಗಿದ್ದು ಕಳೆದ ವರ್ಷದ ಶೇಕಡ 74.15ಕ್ಕೆ ಹೋಲಿಸಿದರೆ ಇದು ಅಲ್ಪ ಏರಿಕೆಯನ್ನು ತೋರಿಸುತ್ತಿದೆ.


☀Ⅱ. ಹೂಡಿಕೆ ಮತ್ತು ರಪ್ತು:
━━━━━━━━━━━━━━━━━

— ಏಪ್ರಿಲ್ 2 0 0 0 ದಿಂದ 2 0 1 4 ರ ನವೆಂಬರ್‍ ವರೆವಿಗೂ ಕರ್ನಾಟಕವು ವಿದೇಶಿ ನೇರ ಬಂಡವಾಳ ಹೂಡಿಕೆಗೆ US $ 14174 ಮಿಲಿಯನ್ ಆಕರ್ಷಿಸಿದ್ದು, ಇದು ರಾಷ್ಟ್ರ ಮಟ್ಟದ ವಿದೇಶಿ ಬಂಡವಾಳ ಹೂಡಿಕೆಯ ಶೇಕಡ 5.99 ರಷ್ಟಾಗಿದೆ.

✧.ಕರ್ನಾಟಕವು ವಾಣಿಜ್ಯ ರಫ್ತಿನಲ್ಲಿ 4ನೇ ಸ್ಥಾನವನ್ನು ಪಡೆದಿದ್ದು, ಸೇವಾ ವಿಭಾಗ ಮತ್ತು ಉತ್ಪನ್ನಗಳ ಕ್ಷ್ರೇತ್ರಗಳಲ್ಲಿ ಪ್ರಮುಖ ರಾಜ್ಯವಾಗಿದೆ. 2013-14 ನೇ ಸಾಲಿನಲ್ಲಿ ಕರ್ನಾಟಕದ ರಪ್ತು ರೂ.290418 ಕೋಟಿಗಳಾಗಿದ್ದು, ಇದು ರಾಷ್ಟ್ರದ ರಪ್ತಿನ ಶೇಕಡ 12.37 ರಷ್ಟು ಇರುತ್ತದೆ.

✧.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (GSDP) ಕರ್ನಾಟಕದ ರಪ್ತು ಸಾಕಷ್ಟು ಹೆಚ್ಚಿನ ಭಾಗವಾಗಿದ್ದು, ಕಾಲಾನಂತರದಲ್ಲಿ ಹೆಚ್ಚಾಗಿರುತ್ತದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (GSDP) ರಫ್ತು ಭಾಗವು 1993-94 ರಲ್ಲಿ ಶೇಕಡ 7.36 ಇದ್ದು, 2013-14 ನೇ ಸಾಲಿಗೆ ಶೇಕಡ 47.3 ರಷ್ಟು ಹೆಚ್ಚಾಗಿದೆ.

✧.ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಾಂಶವು ರಾಜ್ಯದ ರಪ್ತಿನ ಹೆಚ್ಚಿನ ಪಾಲನ್ನು ಹೊಂದಿರುತ್ತದೆ. 2013-14 ನೇ ಸಾಲಿನಲ್ಲಿ ಇದರ ಪಾಲು ಶೇಕಡ 61 ರಷ್ಟಾಗಿದೆ.

✧.ಕರ್ನಾಟಕದ ಮುಕ್ತ ರಪ್ತಿನಡಿ 2010-11 ರಲ್ಲಿ ಶೇಕಡ 40 ರಷ್ಟು ಇದ್ದು, 2013-14 ನೇ ಸಾಲಿಗೆ ಶೇಕಡ 47 ರಷ್ಟು ಏರಿಕೆಯಾಗಿದೆ. ಇದು ರಾಷ್ಟ್ರ ಮಟ್ಟದ ಶೇಕಡ 24 ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.


☀Ⅲ. ಗ್ರಾಮೀಣಾಭಿವೃದ್ದಿ :
━━━━━━━━━━━━━━━━━

✧.ಸುಮಾರು 6137 (ಶೇಕಡ 10.2) ವಸತಿಗಳು ದಿನಂಪ್ರತಿ ತಲಾ 55 ಲೀಟರ್‍ಗಳಷ್ಟು ನೀರನ್ನು ಪಡೆಯುತ್ತಿದ್ದು, 51243 (ಶೇಕಡ 85.8) ವಸತಿಗಳು ದಿನಂಪ್ರತಿ ತಲಾ 55 ಲೀಟರ್‍ ಗಿಂತ ಕಡಿಮೆ ನೀರನ್ನು ಪಡೆಯುತ್ತಿದ್ದು ಮತ್ತು 2393 (ಶೇಕಡ 4) ವಸತಿಗಳು ಗುಣ ಮಟ್ಟವಿಲ್ಲದ ನೀರನ್ನು ಪಡೆಯುತಿದ್ದಾರೆ.

✧.ಫೆಬ್ರವರಿ 2015 ರ ಅಂತ್ಯಕ್ಕೆ ಸುಮಾರು ಶೇಕಡ 50 ರಷ್ಟು ಗ್ರಾಮೀಣ ಪ್ರದೇಶದ ಜನರು ಶೌಚಾಲಯದ ಮಾಲೀಕತ್ವ ವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

✧.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಡಿ ಡಿಸೆಂಬರ್2014ರ ಅಂತ್ಯಕ್ಕೆ 288.61 ಲಕ್ಷ ಮಾನವ ಉದ್ಯೋಗ ದಿನಗಳನ್ನು ಉತ್ಪಾದಿಸಲಾಗಿದೆ.

✧.2000-01 ರಿಂದ 2014-15ರ ಅವಧಿಯಲ್ಲಿ (ಡಿಸೆಂಬರ್ 2014ರ ವರೆಗೆ) ಸುಮಾರು 29.67 ಲಕ್ಷ ಮನೆಗಳನ್ನು ವಿವಿಧ ವಸತಿ ಯೋಜನೆಗಲ್ಲಿ ನಿರ್ಮಿಸಲಾಗಿದೆ.

✧.2000-01 ರಿಂದ 2014-15 ಡಿಸೆಂಬರ್ ಅಂತ್ಯಕ್ಕೆ ಸುಮಾರು 2.62 ಲಕ್ಷ ವಸತಿ ನಿವೇಶನಗಳನ್ನು ಹಂಚಲಾಗಿದ್ದು, ಇದರಲ್ಲಿ 1.49 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಮತ್ತು 1.13 ಲಕ್ಷ ನಗರ ಪ್ರದೇಶದಲ್ಲಿ ಹಂಚಲಾಗಿದೆ. ಅಲ್ಲದೇ 31,806 ನಿವೇಶನಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಂಚಲಾಗಿದೆ.

✧.ವಿವಿಧ ಯೋಜನೆಗಳಡಿ ಗೃಹ ನಿರ್ಮಾಣ ವೆಚ್ಚವನ್ನು ರೂ.1.20 ಲಕ್ಷದವರೆಗೆ ಹೆಚ್ಚಿಸಲಾಗಿದೆ.


☀Ⅳ. ನಗಾರಾಭಿವೃದ್ದಿ :
━━━━━━━━━━━━━

✧.ಪ್ರಸ್ತುತ ಕರ್ನಾಟಕದಲ್ಲಿ 10 ನಗರ ಕಾರ್ಪೋರೇಷನ್‍ ಗಳು, 41 ನಗರ ಮುನಿಸಿಪಲ್ ಕೌನ್ಸಿಲ್‍ಗಳು, 68 ಪಟ್ಟಣ ಮುನಿಸಿಪಲ್ ಕೌನ್ಸಿಲ್‍ಗಳು ಮತ್ತು 94 ಪಟ್ಟಣ ಪಂಚಾಯಿತಿಗಳು ಇರುತ್ತದೆ.

✧.2011 ನೇ ಜನಗಣತಿ ಪ್ರಕಾರ 32.91 ಲಕ್ಷ ಜನಸಂಖ್ಯೆಯು ನಗರ ಕೊಳಚೆ ಪ್ರದೇಶದಲ್ಲಿರುತ್ತಾರೆ. 2001ರಿಂದ 2011ರ ಅವಧಿಯಲ್ಲಿ ಕೊಳಚೆ ಪ್ರದೇಶಗಳ ಜನಸಂಖ್ಯೆಯು ತೀವ್ರವಾಗಿ 18.89 ಲಕ್ಷ ಹೆಚ್ಚಾಗಿರುತ್ತದೆ. ಬೆಂಗಳೂರಿನಲ್ಲಿ ರಾಜ್ಯದ ಒಟ್ಟಾರೆ ಶೇಕಡ 21.5ರಷ್ಟು ಕೊಳಚೆ ಪ್ರದೇಶ ನಿವಾಸಿಗಳಿರುತ್ತಾರೆ.

✧.ನಗರದಲ್ಲಿ ಮೂಲ ಭೂತ ಸೌಕರ್ಯಗಳಾದ ನೀರು ಸರಬರಾಜು ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸಲು 200 ನಗರ ಸ್ಥಳೀಯ ಸಂಸ್ಥೆಗಳಿಗೆ ರೂ.183.00 ಕೋಟಿಗಳನ್ನು ಹೂಡಿಕೆ ಮಾಡಲಾಗಿದ್ದು, ರೂ.2440 ಕೋಟಿಗಳನ್ನು ಮಳೆನೀರು ಒಳ ಚರಂಡಿಗಳಿಗಾಗಿ, ರೂ.1372 ಕೋಟಿಗಳನ್ನು ರಸ್ತೆಗಳು ಮತ್ತು ರಸ್ತೆಗೆ ಸಂಬಂಧಿಸಿದ ಮೂಲ ಸೌಕರ್ಯಕ್ಕಾಗಿ, ರೂ.762 ಕೋಟಿಗಳನ್ನು ಒಳ ಚರಂಡಿ ವ್ಯವಸ್ಥೆಗಾಗಿ ಮತ್ತು ರೂ.3803 ಕೋಟಿಗಳನ್ನು ಘನ ತ್ಯಾಜ್ಯ ನಿರ್ವಹಣೆಗಾಗಿ ನೀಡಲಾಗಿದೆ.

✧.ನಗರದ ಬಡ ಜನರ ಮೂಲ ಭೂತ ಸಮಸ್ಯೆಗಳ ನಿವಾರಣಾ ಕಾರ್ಯಕ್ರಮದಡಿಯಲ್ಲಿ, 24508 ವಸತಿಗಳ ನಿರ್ಮಾಣ ಗುರಿಗೆ, ಇದುವರೆಗೆ 21554 ವಸತಿಗಳನ್ನು ನಿರ್ಮಿಸಲಾಗಿದೆ ಮತ್ತು 2761 ವಸತಿಗಳು ವಿವಿಧ ನಿರ್ಮಾಣ ಹಂತದಲ್ಲಿದೆ. 39785 ವಸತಿ ನಿವೇಶನಗಳನ್ನು ಕಳೆದ 3 ವರ್ಷಗಳಲ್ಲಿ ನೀಡಲಾಗಿದೆ.

✧.ಮಳೆ ನೀರು ಕೊಯ್ಲು ಯೊಜನೆಯನ್ನು 42.3 ಕಿ.ಮೀ ಕಮಾನು ಸೇತವೆಗಳ ಗುರಿಗೆ 33.5 ಕಿ.ಮೀ., ಮತ್ತು 33 ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕಮಾನು ಸೇತುವೆಯ ಮೇಲೆ ಬೀಳುವ ಮಳೆನೀರು ಭೂಮಿ ಮಟ್ಟಕ್ಕೆ ಹರಿಯುವಂತೆ ಅನೇಕ ಪೈಪ್‍ ಗಳನ್ನು ಪ್ರತಿಯೊಂದು ಸ್ತಂಭದಲ್ಲಿ ಅಳವಡಿಸಲಾಗಿದೆ.

ಕೃಷ್ಣರಾಜಸಾಗರ



ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಮೈಸೂರಿನ ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಾಯ ಈ ಅಣೆಕಟ್ಟನ್ನು ಕಟ್ಟಿಸಿದ ಇಂಜಿನಿಯರರಲ್ಲಿ ಪ್ರಮುಖರು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು.

ಲಾಲ್ ಬಹಾದುರ್ ಶಾಸ್ತ್ರಿ

ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್, ೧೯೦೪ - ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದವರು.

    ಜೀವನ

ಲಾಲ್ ಬಹಾದುರ್ ಮೊಘಲ್‌ಸಾರಾಯ್‌ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

    ಭಾರತ ಸರಕಾರದಲ್ಲಿ ಸಲ್ಲಿಸಿದ ಸೇವೆ

ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು. ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು, ಮೊದಲು ಸಾರಿಗೆ ಮಂತ್ರಿಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿ.

    ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು

ಮೇ ೨೭, ೧೯೬೪ರಂದು ಜವಾಹರ್‌ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು. ಸ್ವಲ್ಪಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಹಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.

ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.

ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು, ಅದೇ ಟಾಶ್ಕೆಂಟ್ ಡಿಕ್ಲೆರೇಶನ್. ಆದರೆ, ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರದಾನ ಮಂತ್ರಿ ಹಾಗು ಈ ತರಹದ ಅಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.

ವಿಜಯನಗರ

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ.

ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ನಗರ ಹಂಪೆಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧುಅಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ.

ಈಗ ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ.

ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಜಲ್ಲಿಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು.ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.

ಇತಿಹಾಸ

ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದುಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂಡಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.

ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನ ವರೆಗೂ ಅಲ್ಲಿ ಜನವಸತಿಯಿಲ್ಲ.

ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು

ಕೂಡ್ಲಿ

ಕೂಡ್ಲಿ ಶಿವಮೊಗ್ಗ ಜಿಲ್ಲೆಯ, ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ.

ತುಂಗಾ ಮತ್ತು ಭದ್ರಾ - ಇವೆರಡು ಜೀವನದಿಗಳು ಸಂಗಮವಾಗುವಲ್ಲಿರುವ ಈ ಊರು ತುಂಗಭದ್ರಾ ನದಿಗೆ ಜನ್ಮ ನಿಡುವ ಸ್ಥಳ.

    ಪ್ರಾಮುಖ್ಯತೆ

ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸಿದೆ. ಮಗದೊಂದು ಪ್ರವಾಸಿ ತಾಣವೆಂದೂ ಹೇಳಿದರೆ ತಪ್ಪಾಗದು. ಇಲ್ಲಿಯ 'ರಂಗನಾಥ ಸ್ವಾಮಿ' ದೇವಾಲಯವೂ ಜನಪ್ರಿಯ. ಸಂಗಮ ಸ್ಥಳದಲ್ಲಿ ನಂದಿಯ ಗುಡಿ ಇರುವುದುಂಟು. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಪ್ರತಿಪಾದಿಸುತ್ತದೆ. ಸಂಗಮೇಶ್ವರ ದೇವಾಲಯಕ್ಕೆ ಮಹತ್ತರ ಇತಿಹಾಸವಿರುವುದು. ಈ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಪ್ರಾಚೀನ ಶಿಲ್ಪಕಲೆಗಳಿಂದ ರಾರಾಜಿಸುವ ಈ ದೇವಾಲಯ ಕೂಡ್ಲಿಯ ಪ್ರಮುಖ ಆಕಷಣೆಗಳಲ್ಲೊಂದು.

    ಇತಿಹಾಸ

ಇಲ್ಲಿಯ ಪ್ರಾಚೀನ ಸಂಗಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಇಲ್ಲಿ ಕೆಲವು ಪ್ರಾಚೀನ ಶಾಸನಗಳಿರುವುದುಂಟು. ದೇವಾಲಯದ ಸುಂದರ ಶಿಲ್ಪಕಲೆ ಜನರ ಮನ ಸೂರೆಗೊಳಿಸುತ್ತದೆ. ಇದಲ್ಲದೆ ಇನ್ನೂ ಕೆಲವು ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳು ಇಲ್ಲಿ ಇರುವುದುಂಟು.

    ಭೂಗೋಳ

ಶಿವಮೊಗ್ಗದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಈ ಊರಿಗೆ ಸುಲಭ ಬಸ್ಸು ಸೌಕರ್ಯವಿರುವುದುಂಟು. ಪ್ರಕೃತಿಯ ಮಡಿಲಾದ ಮಲೆನಾಡಿನ ಗಡಿಯಿದು - ಕೂಡ್ಲಿ.

The Vijayanagara Empire

 The Vijayanagara Empire


The Vijayangar Empire was founded by 2 brothers, Harihara and Bukka.
    According to legend they were officers of Muhammad Tughluq.
    They were sent to crush a rebellion in the South.
    Instead they broke away and founded their own kingdom.
    Harihara was crowned king in 1346.
    His brother Bukka I ruled after him, 1357-1377.
    The Vijayanagar Empire is named after its capital city (Its name means city of victory).
    The rulers of Vijayanager gradually conquered more and more territory and the empire reached a peak early in the 16th century.

Harihar II (1377-1406)
Expanded the empire towards the sea coast but his greatest success was in wresting Belgaum and Goa from Bahmani and in sending expedition to Sri Lanka.


Devraya I (1406-1422)
Was defeated by Firoz Shah Bahmani and had to marry his daughter to him. But later he allied with the Reddy Kingdom and managed to defeat Firoz Shah Bahmani. He also built a dam across Tungabhadra.


Devraya II (1422-1446)
Inducted a large number of Muslims in the army (Their induction however had begun during Devraya’s I reign). Nuniz informs us that a large number of kings paid tribute to him.             
 

Krishna Deva Raya (1509-29)
Won Orissa (Gajapati Kingdom) for Vijaynagar and Vijaynagar emerged strongest during his reign.

    Krishna Deva Raya assumed the title of Yavanrayjaya Sthapancharya also called Abhinav Bhoja.
    Paes says that Krishna Deva Raya was a man of much justice but subject to sudden fits of rage.
    Krishna Deva Raya built a new city and expanded patronage to a large number of poets (Astha Diggajas).
    Krishna Deva Raya wrote the political treatise of Amuktamalyamada in Telugu (Jambbavati Kalyannam in Sanskrit) and emphasized on the welfare of people.
    Rama Raja entered into a treaty with the Portuguese to obtain themonopoly of horses.

Defeat of Vijaynagar Emipire

    Vijayanagar’ defeat came in the battle of Talikotta in 1565 due to Rama Raja’s policy of playing one Muslim dynasty against the other for making Vijaynagar supreme.


Vijaynagar Architecture

    The Vijaynagar rulers produced a new style of architecture called as Provida style.
    The large number and prominence of pillars and piers are  some of the distinct features.
    Horse was the most common animal on the pillars.
    Another important feature was the Mandapa or open pavilion with a raised platform, meant for seating deities.
    Important temples were Vithalswami and Hazara temples at Hampi, Tadapatri and Parvati temples at Chidambaramand Varadraja and Ekambarnatha temples at Kanchipuram.
    The Vijaynagar rulers inscribed the stories of the Ramayana and the Mahabharata on the walls of the various temples.
    Hazara temple and Vithalswami temples are examples of this type of wall inscription.

Points to remember :

-The Vijayanagar emperor created their own architecture style named Provida style which plays a lot of emphasis on piers and pillars. They had inscribed the tales from Ramayana and Mahabharata on the various temple that they have established. Most importantly being Vithalswami Temple and Hazari temple at Humpi at Karanataka. Horse was a recurring animals present in all the depictions.

-Two Portuguese visitors namely Nunez and Paes had visited the Vijayanagar empire and have described their experience, which are the basic source of our information.

-Krishana Devaraya assumed the title of Abhinav Bhoja and established political treatise Anuktamalyamada which deals with the welfare of the people.

-Ramaraja was one of the last kings of Tuluva dynasty and was defeated at Battle of Tallikota.

-Harihara-II expanded the Vijayanagar empire to Goa and Coastal area and also sent an expedition to Sri Lanka.

-Devaraya-I was defeated in the battle with Bahamani empire and constructed a dam across Tungbhadra river.


Some MCQzzz

1. Who established Vijayanagara empire?
A. Hari Hara and Bukka
B. Krishna Devaraya
C. Saluva Narasimha
D. Sadasivaraya
Answer:A
2. Vijayanagara empire was established in
A. 1307
B. 1318
C. 1336
D. 1348
Answer:C
3. Who was the Delhi Sultan at the time of establishment of Vijayanagara empire?
A. Feroz Shah Tughluq
B. Ghiyas-ud-din Tughluq
C. Alla-ud-din-khilji
D. Muhammad Bin Tughluq
Answer:D
4. Hari Hara and Bukka belong to the dynasty of
A. Saluva
B. Tuluva
C. Araviti
D. Sangama
Answer:D
5. Who was the first Vijayanagara ruler?
A. Bukkaraya
B. Hari Hara Raya I
C. Devaraya I
D. Alia Ramaraya
Answer:B
6. The Hoyasala kingdom was annexed to Vijayanagara empire during the period of
A. Sri Krishna Devaraya
B. Virupaksha II
C. Immadi Narasimha
D. Hari Hara Raya I
Answer:D
7. The gold coins of Vijayanagara kingdom were called as
A. Varahas
B. Panas
C. Nishka
D. Kakini
Answer:A
8. Nadus of Vijayanagara kingdom were divided into
A. Valanadus
B. Vishayas
C. Sthalas
D. Villages
Answer:C
9. Who wrote Kalahastiswara Shatakam?
A. Dhurjati
B. Allasani Peddana
C. Nandi Timmana
D. Pingali Surana
Answer: A
 10. Vijayanagara and Bahmani Sultans fought frequently for control over
A. Raichur Doab
B. Bijapur
C. Golkonda
D. Gulbarga
Answer: A
11. The persian ambassador who visited Vijayanagara empire in 1443 was
A. Marco polo
B. Abdul Razak
C. Barbosa
D. Nikolo kanti
Answer:B
12. Who was the most famous ruler of Tuluva dynasty?
A. Sri Krishna Devaraya
B. Hari Hara I
C. Tirumala Raya
D. Sadasiva Raya
Answer:A
13. Who was the successor of Saluva Narasimha?
A. Immadi Narasimha
B. Hari Hara II
C. Devaraya I
D. Virupaksha II
Answer: A
14. Who was the founder of Tuluva dynasty?
A. Sadasiva Raya
B. Virupaksha II
C. Tuluva Narasanayaka
D. Tirumala Raya
Answer:C
15. When did Krishna Devaraya made alliance with Portuguese?
A. 1507
B. 1504
C. 1502
D. 1510
Answer:D
16. Who wrote Manu Charithra?
A. Nanditimmana
B. Pingali Surana
C. Allasani Peddana
D. Tenali Ramakrishna
Answer:C
17. Which of the following was written by Nandi Timmana?
A. Amuktamalyada
B. Parijatapaharana
C. Usha Parinayam
D. Manu Charithra
Answer:B
18. What was the period of rule of Sri Krishna Devaraya?
A. 1500-1520
B. 1504-1518
C. 1509-1529
D. 1512-1530
Answer: C
19. Which of the following was written by Sri Krishna Devaraya in Sanskrit?
A. Usha Parinayam
B. Manu Charithra
C. Amuktamalyada
D. Parijatapaharanam
Answer:A
20. Who was the successor of Sri Krishna Devaraya?
A. Tirumala Raya
B. Virupaksha II
C. Achuta Raya
D. Deva Raya I
Answer: C
21. The empire was divided into provinces and the provinces were sub-divided into
A. Bukktis
B. Nadus
C. Aharas
D. Vishayas
Answer: B
22. The eight poets called Ashtadiggajas were in the court of
A. Sri Krishna Devaraya
B. Devaraya II
C. Hari Hara I
D. Bukka Raya I
Answer: A
23. Who had the title of Andhra kavita pitamaha?
A. Nandi Timmana
B. Pingali Surana
C. Allasani Peddana
D. Tenali Rama Krishna
Answer: C
24. Who built vittala swami temple In Hampi?
A. Sadasivaraya
B. Devaraya II
C. Alia Ramaraya
D. Saluva Narasimha
Answer: B
25. Who wrote Madhura Vijayam?
A. Ammanga Devi
B. Parvati Devi
C. Maha Devi
D. Ganga Devi
Answer: D
26. Who wrote Panduranga Mahatyam?
A. Rajasekara
B. Tenali Ramakrishna
C. Ayyala Raju Ramabhadrudu
D. Allasani Peddana
Answer: B
27. What was the title of Sri Krishna devaraya?
A. Andhra Bhoja
B. Kannada Bhoja
C. Andhra Raja
D. Kannada Raja
Answer:A
28. Who was the famouse king in Aravidu dynasty?
A. Narasanayaka
B. Venkatapati Raya II
C. Sri Krishna Devaraya
D. Devaraya II
Answer:B
29. Who built Hazara Ramaswami temple?
A. Sri Krishna Devaraya
B. Ramaraya
C. Sadasiva Raya
D. Immadi Narasimha
Answer: A
30. Who was the Italian Travellar visited Vijayanagaram during the period of Devaraya II?
A. Barbsa
B. Abdul Razak
C. Nikolo Kanti
D. Maroco Polo
Answer:C
31. Who was the last king of Tuluva dynasty?
A. Sri Krishna Devaraya
B. Sadasiva Raya
C. Immadi Narasimha
D. Narasanayaka
Answer:B
32. Who was the last king of Aravidu dynasty?
A. Sri Ranga Raya II
B. Venkatapati Raya II
C. Sadasiva Raya
D. Sri Ranga Raya III
Answer:D
33. Who was the first king of Aravidu dynasty?
A. Achuta Raya
B. Devaraya II
C. Sri Krishna Devaraya
D. Tirumala Raya
Answer:D
34. The Vijayanagara ruler who made treaty with protuguese
A. Alia Ramaraya
B. Bukkaraya
C. Saluva Narasimha
D. Sri Krishnadevaraya
Answer:D
35. What was the period of rule of Sangama dynasty?
A. 1336-1485
B. 1320-1435
C. 1340-1480
D. 1360-1490
Answer: A
36. Who was the successor of Harihara I?
A. Bukka I
B. Bukka II
C. Harihara II
D. Devaraya I
Answer: A
37. Devaraya II was also known as
A. Mahadevaraya
B. Maharaja
C. Rajadhiraja
D. Proudha Devaraya
Answer: D
38. The Kalinga king Prataparudra Gajapati was defeated by
A. Sri Krishna devaraya
B. Tirumalaraya
C. Hari Hara Raya I
D. Achuta Raya
Answer: A
39. Who was the Vijayanagara king at the time Tallikota war?
A. Sri Ranagaraya
B. Venkatapari Raya II
C. Virupaksha II
D. Sadasiva Raya
Answer: D
40. Who played key role in the Vijayanagara politics during the period of Sadasiva Raya?
A. Immadi Narasimha
B. Aliya Rama Raya
C. Bukkaraya I
D. Devaraya I
Answer: B
41. Aliya Rama raya was killed by
A. Muhammad Shah
B. Feroz Shah
C. Hussien Nizam Shah I
D. Kuli Qutb Shah
Answer: C
42. Who shiffeted the capital from Penugonda to Chandra Giri?
A. Venkatapati Raya II
B. Sri Rangaraya II
C. Achuta Raya
D. Sadasiva Raya
Answer: A
43. What was the period of rule of Saluva dynasty?
A. 1460-1510
B. 1486-1505
C. 1490-1520
D. 1498-1540
Answer: B
44. Saluva Narasimha ascended the throne in
A. 1460
B. 1470
C. 1486
D. 1496
Answer: C
45. Amuktamalyada was written by
A. Sri Krishna Devaraya
B. Ramaraya
C. Devaraya II
D. Tirumala Raya
Answer: A
46. Ashtadiggajas were flourished in the court of
A. Devaraya II
B. Sadasivaraya
C. Saluva Narasimha
D. Sri Krishna Devaraya
Answer: D
47. Tallikota war between Vijayanagara and Deccan Sultans took place in
A. 1550
B. 1560
C. 1565
D. 1570
Answer: C
48. The Vijayanagara ruler who was defeated in Tallikota war
A. Ramaraya
B. Sri Krishna Devaraya
C. Saluva Narasimha
D. Devaraya II
Answer: A
49. Which of the following dynasties ruled Vijayanagara empire?
A. Sangama
B. Saluva and Tuluva
C. Aravidu
D. All the above
Answer: D
50. The Bijapur Sultan who was defeated by Sri Krishna Devaraya at Raichur
A. Muhammad Shah I
B. Ismail Adil Shah
C. Feroz Shah
D. Ahmad Shah
Answer: B